ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದ ನರೇಂದ್ರ ಮೋದಿ

Written by By: janajagran

Updated on:

covid-19 vaccine ಕೋವಿಡ್ ಲಸಿಕೆಯ ದ್ವಿತಯೀ ಹಂತ ಇಂದಿನಿಂದ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ನರೇಂದ್ರ ಮೋದಿಯವರು (PM Narendra Modi took his first dose of covid-19 vaccine) ಇಂದು ಲಸಿಕೆ ಪಡೆದರು.

covid-19 vaccine ಕೋವಿಡ್ ಲಸಿಕೆ ಪಡೆೆ ಮೋದಿ

ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದರು. ಈ ಬಗ್ಗೆ ಟ್ವಿಟ್ ನಲ್ಲಿ ಬರೆದುಕೊಂಡ ಅವರು,  ಏಮ್ಸ್ ನಲ್ಲಿ ನಾನು ಮೊದಲ ಬಾರಿಗೆ ಕೋವಿಡ್-19 ಲಿಸಿಕೆಯನ್ನು ತೆಗೆದುಕೊಂಡಿದ್ದೇನೆ. ಲಸಿಕೆಗೆ ಅರ್ಹರಾದ ಎಲ್ಲರೂ ಲಸಿಕೆ ಪಡೆದು ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಕೋವಿಡ್-19 ವಿರುದ್ಧ ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಅಲ್ಪಾವಧಿಯಲ್ಲಿಯೇ ನಡೆಸಿದ ಕಾರ್ಯಾಚರಣೆ ಅಸಾಧಾರಣವಾದದ್ದು, ಅರ್ಹರಿರುವ ಎಲ್ಲರೂ ಲಸಿಕೆಹಾಕಿಸಿಕೊಳ್ಳಿ. ನಾವೆಲ್ಲರೂ ಜೊತೆಯಾಗಿ ಭಾರತವನ್ನು ಕೋವಿಡ್- 19 ಮುಕ್ತವಾಗಿಸೋಣ ಎಂದರು.

ಕೋವಿಡ್ ಲಸಿಕೆಯ ದ್ವಿತೀಯ ಹಂತ ಮಾ. 1 ರಿಂದ ಆರಂಭವಾಗಲಿದ್ದು, 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು. ಬೇರೆ ರೋಗಗಳನ್ನು ಹೊಂದಿರುವ, 2022 ರ ಜನವರಿ 1 ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ ಹಸಿರು ಪಟ್ಟಿಯಲ್ಲಿದ್ದರೂ ಸಾಲ ಮನ್ನಾಏಕಾಗಿಲ್ಲಾ? ಇಲ್ಲಿದೆ ಮಾಹಿತಿ

ದೇಶಾದ್ಯಂತ 27 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಗುರಿಯನ್ನು ಹೊಂದಲಾಗಿದ್ದು, ಅಭಿಯಾನಕ್ಕೆ ವೇಗ ನೀಡುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಪ್ರತಿ ಡೋಸೇಜಿಗೆ ಗರಿಷ್ಟ 250 ರೂಪಾಯಿ ಶುಲ್ಕ ನಿಗದಿಮಾಡಲಾಗಿದೆ. ಭಾರತ್ ಯೋಜನೆಯಡಿ 10 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಕೇಂದ್ರ ಹಾಗೂ ಸಿಜಿಎಚ್ಎಸ್ ಗುರುತಿಸಿರುವ 60 ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಪಡೆದಿದ್ದಾರೆ. ಇದರಿಂದಾಗಿ ದೇಶದ ಎಲ್ಲಾ ನಾಗರಿಕರಿಗೆ ಪ್ರೇರಣೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಪ್ರೇರಣೆಯಾಗಿದ್ದಾರೆ. ದೇಶದ ಎಲ್ಲಾ ನಾಗರಿಕರು ಲಸಿಕೆ ಪಡೆದುಕೊಳ್ಳಬೇಕು. ಈ ಲಸಿಕೆ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕೆಂದು ಮೋದಿಯವರ ಆಶೆಯವಾಗಿದೆ.

ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್ ಲಸಿಕೆ ಲಭ್ಯವಿರಲಿದೆ. ಜನರು ಸಹ ತಮ್ಮ ಮೊಬೈಲ್ ಮೂಲಕವೇ ಲಸಿಕೆ ಎಲ್ಲಿ ಪಡೆಯಬೇಕು ಎಂಬುದರ ಕುರಿತು ನೋಂದಣಿ ಮಾಡಿಕೊಳ್ಳಬೇಕು. ಸಾರ್ವಜನಿಕರು ನೋಂದಣಿ ಮಾಡಿಕೊಂಡ ನಂತರ ಅವರಿಗೆ ಯಾವ ದಿನಾಂಕ ಹಾಗೂ ಯಾವ ಸಮಯದಲ್ಲಿ ಲಸಿಕೆ ಪಡೆದುಕೊಳ್ಳಬಹುದು ಎಂಬುದರ ಕುರಿತು ಸಂದೇಶ ಸಿಗಲಿದೆ. ನೋಂದಣಿ ಮಾಡಿಸಿದ ನಂತರ ಸಾರ್ವಜನಿಕರು ಇನ್ನೊಬ್ಬರಿಗೆ  ಸಮಸ್ಯೆಯಾಗಬಾರದು. ಜನತೆ ಕೋವಿಡ್ ನಿಯಮವನ್ನು ಉಲ್ಲಂಘಿಸಬಾರದು.  ಈಗಾಗಲೇ ದೇಶದಲ್ಲಿ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಹಾಗಾಗಿ ಜನರು ಕಿರಾಣಿ ಅಂಗಡಿಗಳಲ್ಲಿ ಜನಸಂದಣಿ ಸೇರಬಾರದು. ಕೋವಿಡ್ ಮತ್ತೆ ಹರಡದಂತೆ ನೋಡಿಕೊಳ್ಳಬಾರದು. ಜನ ಕೋವಿಡ್ ನಿಯಮ ಪಾಲನೆ ಮಾಡಬೇಕು.

Leave a Comment