ಮಳೆಯಾಶ್ರಿತ ಬೆಳೆಗೆ 8500, ನೀರಾವರಿ ಬೆಳೆಗೆ 17 ಸಾವಿರ ಜಮೆ

Written by Ramlinganna

Updated on:

Crop loss compensation amount : ಎಸ್.ಡಿಆರ್.ಎಫ್ ಮಾರ್ಗಸೂಚಿಯ ಪ್ರಕಾರ ಶೇ. 33 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ರೈತರಿಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಹಾಗೂ ನೀರಾವರಿ ಪ್ರದೇಶಕ್ಕೆ ಹೆಕ್ಟೇರಿಗೆ 17 ಸಾವಿರ  ನೀಡಲಾಗುವುದು.

ಹೌದು, ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 11 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಈ ಪೈಕಿ 11 ತಾಲೂಕುಗಳ ಮಾಹಿತಿ ಪ್ರಸ್ತುತ ಬೆಳೆಹಾನಿ ಬೇರುಮಟ್ಟದ ವಾಸ್ತವ ಪತ್ತೆ ಹಚ್ಚಲು ವೆಬ್ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ. ಅದರಂತೆ ಒಟ್ಟು 2,76,368 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 3,95,751 ರೈತರು ಫ್ರೂಟ್ಸ್ ಪೋರ್ಟಲ್ ನಲ್ಲಿಹೆಸರು ನೋಂದಾಯಿಸಿಕೊಂಡಿದ್ದಾರೆ.ಇದರಿಂದಾಗಿ ಬರಗಾಲ ಹಾಗೂ ನೆಟರೋಗ ಪರಿಹಾರ ಸೇರಿದಂತೆ ಕೃಷಿ ಇಲಾಖೆಯ ಇತರೆ ಪರಿಹಾರಗಳು ಸಿಗಲಿವೆ.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನವೆಂಬರ್ 5 ರವರೆಗಿನ ಕೃಷಿ ಇಲಾಖೆ ವತಿಯಿಂದ ಕೈಗೊಂಡ ಬೆಳೆ ಸರ್ವೆ ಪ್ರಕಾರ ಮುಂಗಾರು ಹಂಗಾಮಿನಲ್ಲಿ 8.72,701 ಹೆಕ್ಟೇರ್ ಬಿತ್ತನೆಯಾಗಿದ್ದು, 2,76,368 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ 91,018 ಹೆಕ್ಟೇರ್ ಬಿತ್ತನೆಯಾಗಿದೆ. ತೋಟಗಾರಿಕೆ ಇಲಾಖೆಯ ಸರ್ವೆ ಪ್ರಕಾರ ಮುಂಗಾರು ಹಂಗಾಮಿನಲ್ಲಿ 14,350 ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಅದರಲ್ಲಿ ಶೇ. 33 ಹೆಕ್ಟೇರ್ ಬಿತ್ತನೆ ಆಗಿದ್ದು, ಅದರಲ್ಲಿಪೂರ್ವ ಮುಂಗಾರಿನಲ್ಲಿ100.82 ಹೆಕ್ಟೇರ್ ನಷ್ಟವಾಗಿದೆ. ಹಿಂಗಾರು ಹಂಗಾಮಿನಲ್ಲಿ 2630 ಹೆಕ್ಟೇರ್ ಬಿತ್ತನೆ ಗುರಿ ನಿಗದಿಯಾಗಿತ್ತು. ಅದರಲ್ಲಿ 1,133 ಹೆಕ್ಟೇರ್ ಬಿತ್ತನೆಯಾಗಿದೆ. ಆದ ನಷ್ಟ ಪರಿಹಾರಕೋರಿ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಎಸ್.ಡಿ.ಆರ್. ಎಫ್ ಮಾರ್ಗಸೂಚಿಯಪ್ರಕಾರ ಶೇ. 33 ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ರೈತರಿಗೆ ಕೃಷಿ ಪರಿಕರಗಳ ಸಹಾಯಧನ ನೀಡಲು ಮಳೆ ಆಶ್ರಿತ ಪ್ರದೇಶಗಳಲ್ಲಿ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಹಾಗೂ 17 ಸಾವಿರ ರೂಪಾಯಿ ನೀರಾವರಿ ಪ್ರದೇಶದ ರೈತರಿಗೆ ನೀಡಲಾಗುವುದು.

Crop loss compensation amount ಬೆಳೆ ಹಾನಿ ಪರಿಹಾರ ಜಮೆಯ ಸ್ಟೇಟಸ್ ಚೆಕ್ ಮಾಡಿ

ಬೆಳೆ ಹಾನಿ ಪರಿಹಾರ ಜಮೆಯ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನಮೂದಿಸಿ ಸ್ಟೇಟಸ್  ಚೆಕ್ ಮಾಡಬಹುದು.

ಎಷ್ಟು ಜನ ರೈತರಿಗೆ ಬೆಳೆ ವಿಮೆ ಜಮೆ

2022 ರ ಮುಂಗಾರು ಹಂಗಾಮಿನಲ್ಲಿ 1,88,600 ರೈತರು ಹಾಗೂ 2023 ರ ಮುಂಗಾರು ಹಂಗಾಮಿನಲ್ಲಿ 1,62,066 ರೈತರು ಬೆಳೆ ವಿಮೆಗೆ ನೋಂದಾಯಸಿರುತ್ತಾರೆ. 2022-23ರಲ್ಲಿ ರೂಪಾಯಿ 108.59 ಕೋಟಿ ವಿಮಾ ಹಣ ರೈತರಿಗೆ ಜಮೆ ಮಾಡಲಾಗಿದೆ.

ಈ ವರ್ಷ 2,22,442 ಹೆಕ್ಟೇರ್ ಹಿಂಗಾರು ಬಿತ್ತನೆ ಗುರಿ ಇದ್ದು, ಈಗಾಗಲೇ 91,018 ಹೆಕ್ಟೇರ್ ಬಿತ್ತನೆ ಆಗಿದೆ. ಈ ವರ್ಷ ಆಯವ್ಯಯದಡಿ ರೂಪಾಯಿ 13,900 ಲಕ್ಷ ಹಿಂಗಾರು ಕೃಷಿ ಪರಿಕರಗಳ ಸಹಾಯಧನ ಅಡಿಯಲ್ಲಿ ಈಗಾಗಲೇ ಬಿತ್ತನೆ ಬೀಜ, ಹಸಿರೆಲೆ ಬಿತ್ತನೆ ಬೀಜ ವಿತರಣೆ, ಮಿನಿ ಕಿಟ್ ಬಿತ್ತನೆ ಬೀಜ ವಿತರಣೆಗೆ ವೆಚ್ಚವಾಗಿದೆ.

ಕೃಷಿ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಸ್ಟೀಲ್ ಓವರ್ 731 ಕೃಷಿ ಹೊಂಡಗಳ ಪೈಕಿ 635 ಹಾಗೂ2023-24 ರ ಸಾಲಿನ 458 ಪೈಕಿ 91 ಕೃಷಿ ಹೊಂಡಗಳನ್ನು ನೀಡಲಾಗಿದೆ. ಜಲಾನಯನ ಅಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 36 ಫಲಾನಭವಿಗಳಿಗೆ ಚ. 60 ಲಕ್ಷ, ಪಿಎಂಕೆಎಸ್.ವೈ ಯೋಜನೆಯಡಿಯಲ್ಲಿ 1722 ಫಲಾನುಭವಿಗಳಿಗೆ ರೂಪಾಯಿ 105.71 ಲಕ್ಷ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 347250 ಫಲಾನುಭವಿಗಳಿಗೆ 1416.01 ಲಕ್ಷ ನೀಡಲಾಗಿದೆ.

Leave a Comment