Sevalal Maharajರ ಜೀವನ ಚರಿತ್ರೆ, ಬಾಲ್ಯ ಜೀವನದ ಮಾಹಿತಿ ಇಲ್ಲಿದೆ

Written by Ramlinganna

Updated on:

Sevalal Maharaj Biography : ಸೇವಾಲಾಲ ಮಹಾರಾಜರು ಯಾವಾಗ ಎಲ್ಲಿ ಜನಿಸಿದರು? ಅವರು ಏನೇನು ಪವಾಡಗಳನ್ನು ಮಾಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೇವಾಲಾಲ ಮಹಾರಾಜರು 1739 ರ  ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಭೀಮಾನಾಯಕ ಧರ್ಮಿಣಿಬಾಯಿಯವರ ಉದರದಲ್ಲಿ ಜನಿಸಿದರು.  ರಾಮಸಿ ರಾಮಾವತ್ (ರಾಥೋಡ್) ಗೋತ್ರದ ರಾಮಜಿನಾಯಕರ ಹಿರಿಯ ಮಗ ಭೀಮಾನಾಯಕ.  ಭೀಮಾನಾಯಕ ಧರ್ಮೀಣಿಬಾಯಿ ಮದುವೆಯಾದ 12 ವರ್ಷಗಳ ನಂತರ ಮರಿಯಮ್ಮಾ ದೇವಿಯ ಕೃಪೆಯಿಂದ ಸೇವಾಲಾಲರು ಜನಿಸುತ್ತಾರೆ. ನಂತರ ಹಾಪಾ, ಬದ್ದು, ಪೂರಾ ಎಂಬ ಮಕ್ಕಳು ಜನಿಸುತ್ತಾರೆ.

ಸೇವಾಲಾಲರಿಗೆ 12 ವರ್ಷ ತುಂಬಿದಾಗ ಮರಿಯಮ್ಮ ತನ್ನ ಷರತನ್ನು ಈಡೇರಿಸಬೇಕೆಂದು  ಧರ್ಮಿಣಿಬಾಯಿಯವರ ಕನಸಿನಲ್ಲಿ ಬಂದು ಸೇವಾಲಾಲರನ್ನು ತನ್ನ ಸೇವೆಗೆ ಬಿಡಬೇಕೆಂದು ಒತ್ತಾಯಿಸುತ್ತಾಳೆ.

ಭೀಮಾನಾಯಕ ದಂಪತಿಯ ಮುದ್ದಿನ ಮಗ ಸೇವಾಲಾಲ್ ಆಗಿದ್ದರು.  . ದೇವಿ ಭೀಮಾನಾಯಕನಿಗೆ ನೀಡಿದ ಸೂಚನೆಯಂತೆ ಹರಕೆ ಈಡೇರಿಸಲು ಕೇಳಿದರೂ ಭೀಮಾನಾಯಕ ಹಿಂದೇಟು ಹಾಕುತ್ತಿರುತ್ತಾರೆ.  ಸೇವಾಲಾಲರು ಸದಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತಾರೆ.  12 ವರ್ಷಗಳಾದರೂ ಭೀಮಾನಾಯಕ ಹರಕೆ ತೀರಿಸಿದೆ ಇರುವುದರಿಂದ ದೇವಿ ಕುಪಿತಗೊಳ್ಳುತ್ತಾಳೆ. ಇದರಿಂದಾಗಿ ಭೀಮಾನಾಯಕನಿಗೆ ಬಗೆಬಗೆಯ ಕಂಟಕಗಳು ಬರಲಾರಂಭಿಸುತ್ತದೆ.ಹಲವಾರು ದನಗಳು ಕಣ್ಮರೆಯಾಗುತ್ತವೆ.

Sevalal Maharaj Biography ಬಾಲ್ಯಜೀವನ 

ಸೇವಾಲಾಲ ಮಹಾರಾಜರು ಬಾಲಕನಾಗಿ ಬೆಳೆಯುತ್ತಿದ್ದಾಗ ಗೋವುಗಳನ್ನು ಮೇಯಿಸಲು ಹೋಗುತ್ತಿದ್ದಾಗಲೇ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಪವಾಡಗಳ್ನು ತೋರುತ್ತಿದ್ದರು. ದೇವಿ ಮರಿಯಮ್ಮ ಅವರಿಂದ ದೊರೆತ ದಿವ್ಯಶಕ್ತಿಯಿಂದಾಗಿ ಬಂಡಿಯನ್ನು ನಗಾರಿಯನ್ನಾಗಿ ಬಾರಿಸುವುದು, ಕೆಸರನ್ನು ಹುಗ್ಗಿ ಪಾಯಸವನ್ನಾಗಿಸುವುದು, ನೀರನ್ನು ತುಪ್ಪ ಮಾಡಿ ಯಜ್ಞ ಮಾಡುತ್ತಿದ್ದರು.  ಅವರು ಒಂದಲ್ಲಾ ಹಲವಾರು ಪವಾಡಗಳನ್ನು ಮಾಡುತ್ತಾ ಬಂಜಾರಾ ಸಮುದಾಯದ ಆರಾಧ್ಯ ದೈವರಾಗಿದ್ದಾರೆ.

ಇದನ್ನೂ ಓದಿ : ರಾಠೋಡ, ಪವಾರ, ಚವ್ಹಾಣ, ಬಾಣ್ಣೋತ್, ಜಾಧವ ಜಾತಿಯಲ್ಲಿ Gotra (ಪಾಡಾ)ಗಳೆಷ್ಡು ಇಲ್ಲಿದೆ ಮಾಹಿತಿ

ಬಾಲ ಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಬಂಜಾರಾ ಸಮುದಾಯದ ಸೇವೆಯನ್ನು ಮಾಡಿದ ಮಹಾನ್ ಚಿಂತರಕರಾಗಿದ್ದಾರೆ.

ವ್ಯಾಪಾರದಲ್ಲಿ ಹಾನಿ

ಸೇವಾಲಾಲರು 12 ವರ್ಷ ವಾದರೂ ದೇವಿಸೇವೆಗೆ ಬಿಡದೆ ಇರುವುದರಿಂದ ದೇವಿ ಕುಪಿತಗೊಳ್ಳುತ್ತಾಳೆ. ಆಗ ಭೀಮಾನಾಯಕನ ವ್ಯಾಪಾರದಲ್ಲಿ ಹಾನಿಯಾಗುತ್ತಿರುತ್ತದೆ. ತಾಂಡದ ಜನ ಅನಾರೋಗ್ಯಕ್ಕೊಳಗಾಗುತ್ತಾರೆ.  ಆರಂಭದಲ್ಲಿ ಸೇವಾಲಾಲ ಮಹಾರಾಜರು ಕೃಷ್ಣನ ಭಕ್ತರಾಗಿರುತ್ತಾರೆ. ವಚನದಂತೆ ನಡೆಯದೆ ಇರುವದರಿಂದ ಹಲವಾರು ಸಂಕಷ್ಟಗಳು ಬರುತ್ತಿವೆಯೆಂದು ಅರಿವಾದ ನಂತರ ಸೇವಾಲಾಲರಿಗೆ ನೀನು ದೇವಿಯವರ ಭಕ್ತನಾಗಬೇಕೆಂದು ಒತ್ತಾಯ ಮಾಡುತ್ತಾರೆ.  ಆರಂಭದಲ್ಲಿ ಭಗವಂತನ ಸೇವೆಯೇ ಮುಖ್ಯವೆಂದು ಭಾವಿಸಿದ ಸೇವಾಲಾಲ ಮಹಾರಾಜರು ನಂತರ ತಂದೆಯ ಒತ್ತಾಯದಿಂದಾಗಿ ದೇವಿಯ ಭಕ್ತನಾಗುತ್ತಾನೆ. ಅಲ್ಲೇ ಜಗದಂಬೆಯ ಗುಡಿ ಕಟ್ಟಿಸುತ್ತಾನೆ. ನಂತರ ದೇವಿಯ ಸೇವೆ ಮಾಡಿದ್ದರಿಂದ ದೈವೀಶಕ್ತಿ ಪಡೆಯುತ್ತಾರೆ.

ಭಾಯಗಡ್ ಸೂರ್ ಖಂಡ್ (Bhaygadh)

ಸೂರಗೊಂಡನಕೊಪ್ಪವನ್ನು ಬಂಜರಾ ಸಮಾಜದವರು ಭಾಯಗಡ್ ಸೂರಖಂಡ್ ಎಂದು ಕರೆಯುತ್ತಾರೆ. ಸೇವಾಲಾಲ್ ಮಹಾರಾಜರನ್ನು ಮೋತಿವಾಳೋ, ಲಾಲ್ ಮೋತಿ ಎಂದು ಕರೆಯುವರು.

ಮೋತಿವಾಳೋ ಬಾಪು (motivalo bapu)

ಮುಂಬಾಯಿನಲ್ಲಿರುವ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿಕೊಳ್ಳುತ್ತದೆ. ಇದನ್ನು ಸೇವಾಲಾಲ ಮಹಾರಾಜರು ತಮ್ಮ ಜಾಣತನದಿಂದ ದಡ ಸೇರಿಸಿದ್ದರಿಂದ ಪೋರ್ಚುಗೀಸರು ಸೇವಾಲಾಲ ಮಹಾರಾಜರಿಗೆ ಮುತ್ತಿನ ಹಾರ ಕಾಣಿಕೆಯಾಗಿ ನೀಡುತ್ತಾರೆ. ಹಾಗಾಗಿ ಸೇವಾಲಾಲರ ಹೆಸರು ಮೋತಿವಾಳೋ ಎಂದು ಹೆಸರಿಡಲ್ಪಡಲಾಯಿತು.

ಬಂಜಾರಾ ಹಿಲ್ಸ್ (Banjara hills)

ಸೇವಾಲಾಲ ಮಹಾರಾಜರ ದೈವೀ ಶಕ್ತಿಯನ್ನು ತಿಳಿದು ಹೈದ್ರಾಬಾದಿನ ನಿಜಾಮ ಸೇವಾಲಾಲ ಮಹಾರಾಜರನ್ನು ಕರೆದು ಪಾದಪೂಜೆ ಮಾಡಿ, ಕಪ್ಪಕಾಣಿಕೆ ನೀಡಿದರು.

ಇದನ್ನೂ ಓದಿ : 

ಹೈದ್ರಾಬಾದಿನ ಕೇಂದ್ರ ಸ್ಥಾನದಲ್ಲಿ ಅವರ ತಂಡ ನೆಲೆಯೂರಲು ಒಂದಿಷ್ಟು ಜಾಗವನ್ನು ಅರ್ಪಿಸುತ್ತಾನೆ. ಆ ಪ್ರದೇಶವನ್ನು ಈಗಲೂ  ಬಂಜಾರಾ ಹಿಲ್ಸ್ ಎಂದು ಕರೆಯುತ್ತಾರೆ.

ತೋಳಾರಾಂ ಕುದುರೆ ಗರಸ್ಯಾ ಸಾಂಡ್ (Tolaram garsya sand)

ಬಂಜಾರಾ ಸಮುದಾಯವಿರುವ ಕಡೆ ಸಂಚರಿಸುತ್ತಾ ಅವರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಅವರು ಕುದುರೆಯ ಮೇಲೆ ಸಂಚರಿಸುತ್ತಾರೆ.  ಅವರ ಕುದುರೆಯ ಹೆಸರು ತೋಳಾರಾಮ. ಅದು ಬಿಳಿ ಬಣ್ಣದ್ದಾಗಿತ್ತು.  ಬಿಳಿಬಾವುಟ, ಬಿಳಿ ವಸ್ತ್ರ,   ಆತ್ಮರಕ್ಷಣೆಗಾಗಿ ನಿಜಾಮರು ಉಡುಗೋರೆಯಾಗಿ ನೀಡಿದ ಕತ್ತಿಯನ್ನು ಜೊತೆಯಲ್ಲಿಡುತ್ತಿದ್ದರು. ಅವರ ಜೊತೆ ತೋಳಾರಾಂ ಕುದುರೆ ಹಾಗೂ ಗರಸ್ಯಾ ಸಾಂಡ್ ಸದಾ ಇರುತ್ತಿದ್ದವು

ಸೇವಾಲಾಲರ ನಿಧನ

ಸೇವಾಲಾಲ ಮಹಾರಾಜರು 1773 ರ ಜನವರಿ 2 ರಂದು ಐಕ್ಯರಾದರು.

ಜನರ ಸೇವೆ

ಸೇವಾಲಾಲ ಮಹಾರಾಜರು ಭೇಟಿ ನೀಡುವ ಪ್ರತಿ ಸ್ಥಳದಲ್ಲಿ ಪ್ರವಚನ ಏರ್ಪಾಡು ಮಾಡುತ್ತಿದ್ದರು.ರೋಗಿಗಳ ಶೂಶ್ರೂಶೆಗೆ ಕ್ಯಾಂಪುಗಳ ಆಯೋಜನೆಯಾಗುತ್ತಿತ್ತು. ಅವರು ಕೇವಲ ಮಾನವರಷ್ಟೇ ಅಲ್ಲ, ಭೂಮಂಡಲದಲ್ಲಿ ಜೀವಿಸುತ್ತಿರುವ ಸಕಲ ಜೀವರಾಶಿಗಳ ಒಳತಿಗಾಗಿ ಪ್ರಾರ್ಥಿಸುತ್ತಿದ್ದರು.

ಹಿತ ಸಂದೇಶಗಳ ಸಾರ ಇಲ್ಲಿದೆ ನೋಡಿ

  1. ಕೋರ್ ಗೋರೂನ್ ಸಾಯಿ ವೆಣು,

ಜೀವ ಜನ್ ಗಾನಿರ್ ಸಾಯಿವೇಣು,

ಮುಂಗ್ರಿ ಖುಂಟಾರ್ ಸಾಯಿ ವೇಣು,

ಕೀಡಾ ಮಕೋಡಾರ ಸಾಯಿ ವೇಣು.

  1. ಚೋರಿ ಮತ್ ಕರೋ,

ಜೊ ಕರಿಯೋ ಚೋರಿ,

ಖಾಂಯೆ ಕೋರಿ,

ಹಾತೆಮಾಡಿ ಹತಕಡಿ,

ಪಗಮಾಯಿ ಬೇಡಿ,

ಡೋರಿ ಡೋರಿ ಹಿಂಡಿಯೇ

  1. ಗೋರ್ ಗರೀಬೇನ್ ದಾಂಡನ್ ಖಾಯೆ

ವೋರ್ ಸಾತ್ ಪೀಡಿ ಪರ್ ದಾಗ್ ಲಗ್ ಜಾಯೆ

ವಂಶ್ ಪರ್ ದೀವೋ ಕೋನಿ ರಿಯೇ.

  1. ಜಾಣಜೋ ಛಾಣಜೋ ಮಾನ್ ಜೋ ಅಂದರೆ ಆಲಿಸು, ಆಲಿಸಿದ್ದರಲ್ಲಿ ಒಳಿತು ಯಾವುದು ಕೆಡುಕು ಯಾವುದು ಎಂಬುದನ್ನು ಪರಿಶೀಲಿಸು, ಒಳ್ಳೆಯದನ್ನು ಸ್ವೀಕರಿಸು ಎಂದರ್ಥ.
  2. ಅನುಭಾವೇತಿ ಕಳಜಕೋ ಖರೋ, ಅನುಭಾವೇತಿ ಸೀಕಜಕೋ ಭುಲಾಯೆನಿ
  3. ರಪಿಯಾನ ಕಟೋರೋ ಪಾಣಿ ವಕಿಯೇ

ರಪಿಯಾನ ತೇರ ಚಣಾ ವಕಿಯೇ

  1. ಮಾಯೆನ ಬೇಟಾ ಭಾರಿ ವಿಯೇ

ಮಲಕೇರ ವಾತ್ ಪಲಕೇಮಾ ವಿಯ

  1. ಸೋನೇರ ಮೋಲ್ ಸಿಂಗೇವಾಳ್ ಗಾವಡಿ ವಕಜಾಯ
  2. ಅಜಿ ಜಲಮ್ ಲಿಂಯೂ ಬನಾ ಹತಿಯಾರೇರ ವೇರ್ ಮಚಾಂಯೂ

 

ಲೇಖಕ: ರಾಮಲಿಂಗ್ ಚಿನ್ನಾ ರಾಠೋಡ ಮೊ. 9731491393

Ramlinganna chinna Rathod

Leave a Comment