ದ್ವಿಚಕ್ರ ವಾಹನ ಖರೀದಿಗೆ ಮೀನು ಮರಿ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Bike purchase subsidy get now : ದ್ವಿಚಕ್ರ ವಾಹನ ಖರೀದಿಗೆ ಮೀನು ಮರಿ ಖರೀದಿಗೆ ಮೀನು ಮರಿ ಪಾಲನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಮೀನು ಸಲಕರಣೆ ಕಿಟ್, ಮೀನು ಮಾರಾಟಕ್ಕೆ ನಿರ್ಮಾಣ ಹಾಗೂ ಮೀನು ಮಾರಾಟಕ್ಕೆ ದ್ವಿಚಕ್ರ ವಾಹನ, ಐಸ್ಟಾಕ್ಸ್ ಖರೀದಿಗೆ ಸಹಾಯಧನ ಮತ್ತು ಸಮಗ್ರ ಮೀನುಗಾರಿಕೆ ಅಭಿವೃದ್ಧಿ ಯೋಜನೆಯ ಡಿ. ಮೀನುಮರಿ ಖರೀದಿ, ಜಲಾಶಯ ಕೆರೆಗಳ ಅಂಚಿನಲ್ಲಿ ಮೀನು ಮರಿ ಪಾಲನೆಗೆ ಸಹಾಯಧನ ನೀಡಲಾಗುವುದು.

ಕೆರೆಗಳ ಅಂಚಿನಲ್ಲಿ ಮೀನುಮರಿ ಪಾಲನೆಗೆ ಸಹಾಯಧನ ನೀಡಲಾಗುವುದು. ಕೆರೆಗಳಿಗೆ ಉಚಿತವಾಗಿ ಉಚಿತವಾಗಿ ಮೀನುಮರಿ ದಾಸ್ತಾನು ಮಾಡುವ ಸಲುವಾಗಿ ಸಾಮಾನ್ಯ, ಎಸ್.ಸಿ, ಎಸ್.ಟಿ ಆಯ್ದ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

Bike purchase subsidy get now ಅರ್ಜಿ ಎಲ್ಲಿ ಸಲ್ಲಿಸಬೇಕು 

ಮೀನುಗಾರಿಕೆ ಇಲಾಖೆಯ ಪ್ರಸಕ್ತ ಸಾಲಿಗೆ ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ನೀಡುತ್ತಿರುವ ಸೌಲಭ್ಯ ಪಡೆಯುವ ಆಸಕ್ತ ಮೀನುಗಾರರು ನಾಗರಿಕ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಎಫ್ಐಡಿ ಬಳಸಿಕೊಂಡು ಅಕ್ಟೋಬರ್ 13 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಬಾದಾಮಿ 8095303104, ಜಮಖಂಡಿ 98866820761 ಅವರನ್ನು ಸಂಪರ್ಕಿಸಲು ಮೀನುಗಾರಿಕೆ ಉಪನಿರ್ದೇಶಕಿ ಅಂಜನಾದೇವಿ ತಿಳಿಸಿದ್ದಾರೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಡಿಯಲ್ಲಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ಕೆಳಕಂಡ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಹ ಪರಿಶಿಷ್ಟ  ಪಂಗಡಗಳ  ಅರ್ಹ ಫಲಾನುಭವಿಗಳಿಂದ ಆನ್ಲ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಜನೆಗಳ  ವಿವರ

ಗಂಗಾ ಕಲ್ಯಾಣ ಯೋಜನೆ (ಕೊಳವೆ ಬಾವಿ), ಭೂ ಒಡೆತನ ಯೋಜನೆ, ಮೈಕ್ರೋ ಕ್ರೇಡಿಟ್ (ಪ್ರೇರಣಾ) ಯೋಜನೆ ಹಾಗೂ ಸ್ವಯ ಉದ್ಯೋಗ ಕಾರ್ಯಕ್ರಮಗಳಾದ ಸ್ವಯಂ ಉದ್ಯೋಗ ನೇರ ಸಾಲ, ಹೈನುಗಾರಿಕೆ ಯೋಜನೆ (ಬ್ಯಾಂಕುಗಳ ಸಹಾಯದೊಂದಿಗೆ) ಸ್ವಾವಲಂಬಿ ಸಾರಥಿ ಯೋಜನೆ (ಬ್ಯಾಂಕುಗಳ ಸಹಾಯದೊಂದಿಗೆ) ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ) ಹಾಗೂ ಫಾಸ್ಟ್ ಫುಡ್ ಟ್ರಕ್ ಟ್ರೈಲರ್ (ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ ಯೋಜನೆ (ಬ್ಯಾಂಕುಗಳ ಸಹಯೋಗದೊಂದಿಗೆ) ಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.

20233-23, 2023-24, 2024-25, 2025-26ನೇ ಸಾಲಿನಲ್ಲಿ ಮುಖಾಂತರ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಅರ್ಹ ಫಲಾನುಭವಿಗಳು ನಿಗಮದ

https://sevasindhu.karnataka.gov.in/

ವೆಬ್ಸೈಟ್ ದಲ್ಲಿ ಆನ್ಲೈನ್  ಮೂಲಕ ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಮೂಲಕ ಅಕ್ಟೋಬರ್ 17 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.

ಇ ಕೆವೈಸಿ ಕಡ್ಡಾಯ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಮುಂದಿನ ಕಂತಿನ ನೆರವು ಪಡೆಯಲು ಅರ್ಹ ರೈತರು ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಇಕೆವೈಸಿ ಪೂರ್ಣಗೊಳಿಸದ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಹಣ ಜಮೆ ಆಗುವುದಿಲ್ಲ. ಆದ್ದರಿಂದ ಬಾಕಿ ಇರುವ ರೈತರು ತಕ್ಷಣವೇ ಈ ಪ್ರಕ್ರಿಯೆ ಮುಗಿಸಬೇಕಿದೆ. ಇಕೆವೈಸಿ ಪೂರ್ಣಗೊಳಿಸಲು ಆಧಾರ್ ಬಯೋಮೆಟ್ರಿಕ್ ಗಾಗಿ ಹತ್ತಿರದ ಸಿ.ಎಸ್ಸಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬೆರಳಚ್ಚು ಮುಖಾಂತರ ಮಾಡಿಸಬೇಕು. ಇಲ್ಲವೇ ಫೇಸ್ ಅಥೆಂಟಿಕೇಶನ್ ಗಾಗಿ ಪಿಎಂ ಕಿಸಾನ್ ಮೊಬೈಲ್ ಆಫ್ ಬಳಸಿ ಮುಖ ಗುರುತಿಸುವಿಕೆ ಮೂಲಕ ಮನೆಯಲ್ಲೇ ಕುಳಿತು ಉಚಿತವಾಗಿ ಇ ಕೆವೈಸಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ ಪಡಿತರ ಪಿಎಂ ಕಿಸಾನ್ ಹಣ ಪಡೆಯಲು ಇಕೆವೈಸಿ ಕಡ್ಡಾಯ ಮೊಬೈಲ್ ನಲ್ಲಿ ಮಾಡಿ

ಮುಂದಿನ ಕಂತಿನ ಧನ ಸಹಾಯದಿಂದ ಯಾವುದೇ ರೈತರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಸೂಚಿಸಿದ್ದು, ಅರ್ಹ ರೈತರು ವಿಳಂಬ ಮಾಡದೆ ಶೀಘ್ರವಾಗಿ ಇಕೆವೈಸಿ ಪೂರ್ಣಗೊಳಿಸಿ ಯೋಜನೆ ಸೌಲಭ್ಯ ಪಡೆಯಬೇಕೆಂದು ಸೂಚಿಸಲಾಗಿದೆ.

Leave a Comment