ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು

Written by By: janajagran

Updated on:

ಪ್ರಸಕ್ತ ವರ್ಷದ ನೈರುತ್ಯ ಮುಂಗಾರು ಗುರುವಾರ ಕೇರಳಕ್ಕೆ (Southwest monsoon hits Kerala)  ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈ ಮಾಹಿತಿ ಮಾಡಿದೆ. ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಮೈಲ್ಮೈ ಸುಳಿಗಾಳಿ ತೀವ್ರವಾಗಿರುವುದರಿಂದ ಕರ್ನಾಟಕದ ಕೆಲವೆಡೆ ಜೂನ್ 6 ರವರೆಗೆ ರಾಜ್ಯಾದ್ಯಂತ ಗುಡುಗು ಸಹಿತಿ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಜೂನ್ 4 ರಂದು ರಾಜ್ಯದ 17 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Southwest monsoon hits Kerala ಉತ್ತರಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ಗದಗ, ಚಿಕ್ಕಮಗಳೂರು, ಕೋಲಾರ, ತುಮಕೂರು, ಶಿವಮೊಗ್ಗ, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಆಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಸಿಡಿಲು ಬೀಳುವ ಮೊದಲೇ ಮುನ್ಸೂಚನೆ ನೀಡುತ್ತದೆ ದಾಮಿನಿ ಆ್ಯಪ್‌ (Damini App): ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಡಿಕೆಯಂತೆ ಜೂನ್ 1 ರಿಂದ ಮುಂಗಾರು ಮಾರುತಗಳು ಕೇರಳ ಪ್ರವೇಶಿಸುತ್ತವೆ. ಈ ವರ್ಷ ಎರಡು ದಿನ ತಡವಾದರೂ ಮಂಗಾರು  ಮಾರುತಗಳಿಂದಾಗಿಯೇ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ದೇಶದ ಬಹುತೇಕ ಕಡೆ ಮಳೆಯಾಗುತ್ತದೆ. ದೇಶದಲ್ಲಿ ವಾಡಿಕೆ ಮಳೆಯ ಶೇ. 70 ರಷ್ಟು ಮಳೆ ಜೂನ್-ಸೆಪ್ಟೆಂಬರ್ ನಡುವಿನ ಮುಂಗಾರು ಋತುವಿನಲ್ಲಿ ಸುರಿಯುತ್ತದೆ. ಈ ವರ್ಷ ವಾಡಿಕೆ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಮಳೆ ಕೆಲವು ಸಲ ಕೇರಳ ಪ್ರವೇಶಿಸಿದರೂ ಕರ್ನಾಟಕದಲ್ಲಿ ಮಳೆೆಯಾಗುವುದಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ಕೆಲವು ಸಲ ಮಳೆಯಾಗದೆ ಹೋಗುತ್ತದೆ.ಇದರಿಂದಾಗಿ ರೈತರಿಗೆ ನಿರಾಶೆಯಾಗುತ್ತದೆ. ಬಿತ್ತಣೆಕೆ ಮಾಡಲು ಸಜ್ಜಾಗಿ ಕುಳಿತಿರುವ ರೈತರಿಗೆ ನಿರಾಶೆಯಾಗುತ್ದದೆೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಂತು ಮುಂಗಾರು ಮಳೆ ತಡವಾಗಿ ಪ್ರವೇಶ ಮಾಡುತ್ತದೆ. ಮೊದಲೇ ಬಿಸಿಲಿನಿಂದ ತತ್ತರಿಸಿರುವ ಭಾಗಕ್ಕೆ ಮಳೆಯೂ ತಡವಾಗಿ ಬರುತ್ತದೆ. ಹೀಗಾಗಿ ರೈತರ ಬಿತ್ತಣಿಕೆಯಲ್ಲಿ ಹಿಂದೆ ಆಗುದ್ದಾರೆ.

ನಿಮ್ಮೂರಿನಲ್ಲಿ ಮಳೆಯಾಗುತ್ತದೆೆೆೆಯೇ? ಈ ನಂಬರಿಗೆ ಕರೆ ಮಾಡಿ

ನಿಮ್ಮೂರಿನಲ್ಲಿ ಮಳೆ ಯಾವಾಗ ಆಗುತ್ತದೆ ಎಂಬ ಮಾಹಿತಿ ಕೇಳಲು ರೈತರು ಈಗ ಯಾರಿಗೆ ಕೇಳಬೇಕು?ಎಲ್ಲಿ ವಿಚಾರಿಸಬೇಕು ಎಂಬ ಆಲೋಚನೆಯಲ್ಲಿರುತ್ತಾರೆ. ಆದರೆ ಈಗ ರೈತರು ಯಾರಿಗೂ ಕಾಯಬೇಕಿಲ್ಲ. ತಮ್ಮ ಬಳಿಯಿರುವ ಫೋನ್ ನಿಂದ ಒಂದೇ ಒಂದು ಕರೆ ಮಾಡಿದರೆ ಸಾಕು,  ಒಂದೇ ನಿಮಿಷದಲ್ಲಿ ತಿಳಿದುಕೊಳ್ಳಬಹುದು. ಹೌದು, ವರುಣಮಿತ್ರ ನಂಬರ್ 9243345433 ನಂಬರಿಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆ ಯಾವಾಗ ಬರುತ್ತದೆ ಎಂಬ ಮಾಹಿತಿ ಸಿಗುತ್ತದೆ.

Leave a Comment