ಇಂದಿನಿಂದ ಮೂರು ದಿನಗಳ ಕಾಲ ಮಳೆ ಸಾಧ್ಯತೆ

Written by By: janajagran

Updated on:

rain alert in karnataka ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ  ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಮಾರ್ಚ್ 29 ರಿಂದ 31ರವರೆಗೆ ಗುಡುಗುಸಿಡಿಲು ಸಹಿತ ಮಳೆಯಾಗಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಹಾವೇರಿಯಲ್ಲಿ ಮಾರ್ಚ್ 29 ರಂದು ಸಾಧಾರಣ ಮಳೆಯಾಗಲಿದೆ.

rain alert in karnataka ಹಲೆವೆಡೆ ಮಳೆ

ಬಿರು ಬಿಸಿಲಿನಿಂದ ಕೆಂಡವಾಗಿದ್ದ ರಾಜ್ಯಕ್ಕೆ ಹಲವೆಡೆ ಭಾನುವಾರ ಅಕಾಲಿಕ ಮಳೆ ಸುರಿದಿದೆ. ಉತ್ತರ ಕನ್ನಡದ ಯಲ್ಲಾಪುರ, ದಾಂಡೇಲಿ, ಜೋಯಾಡಾ ತಾಲೂಕಿನಲ್ಲಿ ಎರಡು ಗಂಟೆಗೂ ಹೆಚ್ಚು ಮಳೆಯಾಗಿದೆ. ಯಲ್ಲಾಪುರ ತಾಲೂಕಿನ ಮಾದೆಕೊಪ್ಪದಲ್ಲಿ  20ಕ್ಕೂ ಹೆಚ್ಚು ಮನೆಯ ಛಾವಣೆ ತಗಡು ಹಾರಿಹೋಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಹಾವೇರಿ ಜಿಲ್ಲೆಯ ಹಿರೇಕೇರೂರ, ತಾವರಗಿ, ಚೋಗಿಹಳ್ಳಿಯಲ್ಲಿ ಮಳೆಯಾಗಿದೆ. ಶಿವಮೊಗ್ಗದ  ಆಯನೂರಿನಲ್ಲಿ ಸಿಡಿಲು ಬಡಿದು ಅದಿಲ್ (18) ವರ್ಷದ ಯುವಕ ಮೃಪಟ್ಟಿದ್ದಾನೆ.

ನದಿ ಸುತ್ತಲಿನ ಜನರಿಗೆ ಸೂಚನೆ

ಕಾರಂಜಾ ಜಲಾಶಯದಿಂದ ಭಾಲ್ಕಿ, ಔರಾದ್ ಹಾಗೂ ಕಮಲನಗರ ಪಟ್ಟಣಗಳಿಗೆ ಮಾರ್ಚ್ 28 ರಿಂದ  ನೀರು ಸರಬರಾಜು ಮಾಡಲಾಗುತ್ತಿದೆ. ಅದ್ದರಿಂದ ನೀರು ಬಿಡುವ ಪ್ರಯುಕ್ತ ಜಲಾಶಯದ ಕೆಳ ಪಾತ್ರ, ಸುತ್ತಲಿನ ಜನರು ನದಿಪಾತ್ರಕ್ಕೆ ಇಳಿಯಬಾರದು ಎಂದು ಕಾರಂಜಾ ಜಲಾಶಯದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂಡಮಾರುತ – ರಾಜ್ಯದ ಕರಾವಳೀಲಿ ಅಲೆಗಳಬ್ಬರ

ಅರಬ್ಬಿ ಸಮುದ್ರದಲ್ಲಿ ಬಿಫೋರ್ ಜೋಯ್ ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸಸಿಹಿತ್ತು, ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಮಲ್ಪೆ ಬೀಚ್ ಗಳಲ್ಿ ಸಮುದ್ರದ ಅಲೆಗಳ ಅಬ್ಬರ ಬುಧವಾರ ನಸುಕಿನಿಂದ ಹೆಚ್ಚಾಗಿದೆ.

ಜಿಲ್ಲಾಡಳಿತದ ಆದೇಶದಂತೆ ಪಣಂಬೂರು, ಬುಧವಾರ ನಸುಕಿನಿಂದ ಚಂಡಮಾರತದ ಪ್ರಭಾವ ಕಡಲದ ತಡಿಯಲ್ಲಿ ಗೋಚರಿಸುತ್ತಿದೆ. ಬೃಹತ್ ಗಾತ್ರದ ಅಲೆಗಳು ಸಮುದ್ರದ ಅಂಚಿಗೆ, ಬಂಡೆಕಲ್ಲುಗಳಿಗೆ ಬಹುವೇಗಗಳಲ್ಲಿಬಂದು ಅಪ್ಪಳಿಸುತ್ತಿವೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ಟ, ಕೈಕೋ, ಹಿಲೆರಿಯಾನಗರ, ಸುಭಾಷನಗರ, ಕೈಕೋ, ಸಮ್ಮರ್ ಸ್ಯಾಡ್, ಸೋಮೇಶ್ವರ, ಉಚ್ಚಿಲ, ಬಟಪಾಡಿ ಭಾಗದ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಚಂಡಮಾರುತ – ಕರ್ನಾಟಕ ಕರಾವಳಿಗೆ 3 ದಿನ ಕಟ್ಟೆಚ್ಚರ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಫೋರಜೋಯ್ (ವಿಪತ್ತು) ಚಂಡಮಾರುತ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಕರ್ನಾಟಕ, ಲಕ್ಷದ್ವೀಪ, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ.

ಚಂಡಮಾರುತದ ಪ್ರಭಾವ ಜೂನ್ 10 ರವರೆಗೆ ದೇಶದ ನೈಋತ್ಯ ಭಾಗದಲ್ಲಿರುವ ಈ ರಾಜ್ಯಗಳ ಕರಾವಳಿ ಮೇಲೆ ಆಗಲಿದೆ. ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಬಿಸುತ್ತಿದೆ.  ಶುಕ್ರವಾರ 135- 145 ಕಿಮೀ ಗೆ ಹಾಗೂ ಶನಿವಾರ 170 ಕಿ.ಮೀ ಗೆ ಏರಬಹುದು. ಹೀಗಾಗಿ ಮೀನುಗಾರರು ಕರಾವಳಿಗೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.ಈ  ಚಂಡಮಾರುತ ಮುಂಗಾರು ಮೇಲೆ ಪರಿಣಾಮ ಬೀರಲಿದೆ.

Leave a Comment