ಕೃಷಿ ಮೇಳದಲ್ಲಿ 10 ಹೊಸ ತಳಿ, 3 ಲಕ್ಷ ಹೋತ ಪ್ರದರ್ಶನ

Written by By: janajagran

Updated on:

Krishi mela at Bangalore ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಯ 10 ಹೊಸ ತಳಿ, 28 ನೂತನ ತಂತ್ರಜ್ಞಾನ ಬಿಡುಗಡೆ ಮಾಡುವ  ಮೂಲಕ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ರೈತರಿಗೆ ತಲುಪಿಸುವ ಉದ್ದೇಶದಿಂದ ಬೆಂಗಳೂರಿನ ಹೆಬ್ಬಾಳದಲ್ಲಿರುವ ಗಾಂಧಿ  ಕೃಷಿ ವಿಶ್ವವಿದ್ಯಾಲಯದಲ್ಲಿ ನವೆಂಬರ್ 11 ರಿಂದ 14 ರವರೆಗೆ ನಡೆಯುವ ಕೃಷಿ ಮೇಳ ಆಯೋಜಿಸಲಾಗಿದೆ. ಈ ಬಾರಿ ನಡೆಯುವ ಕೃಷಿ ಮೇಳದಲ್ಲಿ ಹತ್ತು ಹೊಸ ತಳಿಗಳು ಹಾಗೂ ಕೃಷಿ ಹಾಗೂ ಕೃಷಿ ಆಧಾರಿತ 28 ತಂತ್ರಜ್ಞಾನಗಳನ್ನು  ಹಳ್ಳಿಕಾರ್ ಎತ್ತುಗಳ ಪ್ರದರ್ಶನ, 3 ತಕ್ಷ ರೂಪಾಯಿ ಮೌಲ್ಯದ ಓತ ಪರಿಚಯಿಸಲಿದೆ.

Krishi mela at Bangalore ಹೊತ ತಳಿಗಳ ಪರಿಚಯ

ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಈ ವರ್ಷದ ಮೇಳದಲ್ಲಿ 10  ಹೊಸ ತಳಿಗಳ ಬೆಳೆಗಳನ್ನು ಪರಿಚಯಿಸುತ್ತಿದೆ. ಜ್ಯೋತಿ ತಳಿಯನ್ನು ಹೋಲುವ ಕೆಎಂಪಿ-220 ತಳಿ ಭತ್ತ, ಎಂಎಸ್ಎನ್-99 ತಳಿ ಭತ್ತ, ಕೆಎಂಆರ್ 316 ತಳಿ ರಾಗಿ, ಜೆಪಿಯುಪಿ 28 ತಳಿಯ ಬರಗು, ಜಿಪಿಯುಎಫ್-3 ತಳಿಯ ನವಣೆ, ಸಿಓವಿಸಿ-18061 ತಳಿಯ ಕಬ್ಬು, ಮೂರುವರೆ ವರ್ಷಕ್ಕೆ ಫಸಲು ನೀಡುವ ಹಾಗೂ ವರ್ಷದಲ್ಲಿ ಎರಡು ಬಾರಿ ಫಲ ಬಿಡುವ ಬೈರಚಂತ್ರ ಹಲಸು, ಓಟ್ಸ್ ಹೋಲುವ ಮೇವಿನ ತೋಕೆ ಗೋದಿ ಆರ್ ಓ:ತಳಿಗಳನ್ನು  ಪರಿಚಯಿಸುತ್ತಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆ, ಮೊಬೈಲ್ ನಲ್ಲಿಯೇ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಬೆಳೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ 5 ತಂತ್ರಜ್ಞಾನಗಳನ್ನು ಆವಿಷ್ಕರಿಸಿದೆ. ಅದೇ ರೀತಿ ಉತ್ಪಾದನೆಗೆ 8, ಬೆಳೆ ಸಂರಕ್ಷಣೆ ಕುರಿತ 10, ರೇಷ್ಮೆ ಕೃಷಿಗೆ ಸಂಬಂಧಿಸಿದ 3, ಜೇನು ಕೃಷಿ ಮತ್ತು ಕೃಷಿ ಎಂಜಿನಿಯರಿಂಗ್ ಕುರಿತ ತಲಾ ಒಂದು ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತದೆ.

65 ಲಕ್ಷ ಮೌಲ್ಯದ ಹಳ್ಳಿಕಾರ ಎತ್ತುಗಳ ಪ್ರದರ್ಶನ

65 ಲಕ್ಷ ರೂಪಾಯಿ ಮೌಲ್ಯದ ಎತ್ತುಗಳು, ಮಂಡ್ಯ ಮಳ್ಳವಳ್ಳಿಯ ಹಳ್ಳಿಕಾರ್ ಎತ್ತುಗಳು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದೆ. ಈ ಎತ್ತುಗಳು ದಷ್ಟಪುಟ್ಟವಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅದೇ ರೀತಿ ರಾಮನಗರದ 50 50 ಲಕ್ಷ ರೂಪಾಯಿ ಮೌಲ್ಯದ ಎತ್ತುಗಳನ್ನು ನೋಡಬಹುದು.

3 ಲಕ್ಷ ರೂಪಾಯಿ ಮೌಲ್ಯದ  ಓತ

ದೊಡ್ಡಬಳ್ಳಾಪುರ ಜಮುನಾ ಪ್ಯಾರಿ ಹೆಸರಿನ ಓತವೂ ಮೇಳದ ಆಕರ್ಷಣೆಯಾಗಿದೆ. ಈ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ.

ರೇಷ್ಮೆ ಗೂಡು ಬಿಡಿಸುವ ಯಂತ್ರ

ಇದೇ ಮೊದಲ ಬಾರಿಗೆ ವಿವಿ ವಿದ್ಯಾರ್ಥಿಗಳು ಸಂಶೋಧಿಸಿರುವ ರೇಷ್ಮೆ ಗೂಡು ಬಿಡಿಸುವ ಯಂತ್ರವನ್ನು ಪ್ರದರ್ಶಿಸಲಾಗಿದೆ. ಈ ಯಂತ್ರವು ಚಂದ್ರಿಕೆಯಿಂದ ರೇಷ್ಮೆ ಗೂಡು ಬಿಡಿಸಲಿದೆ. ಸುಮಾರು 7 ರಿಂದ 8 ಸಾವಿರ ರೂಪಾಯಿ ವೆಚ್ಚ ತಗಲಬಹುದು. ವಿದ್ಯಾರ್ಥಿಗಳು ಮೇಳದಲ್ಲಿ ಪ್ರಾತ್ಯಕ್ಷಿಕೆ ಮಾಡಲಿದ್ದಾರೆ.

ಮೊಬೈಲ್ ನಲ್ಲೇ ವೀಕ್ಷಿಸಿ ಕೃಷಿಮೇಳ

ಮೊಬೈಲ್ ನಲ್ಲೇ ಕೃಷಿ ಮೇಳವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ವೆಬ್ ಪೇಜ್, ವೆಬ್ ಸೈಟ್, ಯೂಟ್ಯೂಬ್, ಫೇಸ್ ಬುಕ್ ಮತ್ತು ಜೂಮ್ ಮೂಲಕ ಬೆಳಗ್ಗೆ 10 ರಿಂದ ಸಾಯಂಕಾಲ 4 ರವರೆಗೆ ನೇರಪ್ರಸಾರ ವೀಕ್ಷಿಸಬಹುದು.

ವೆಬ್ ಸೈಟ್ : https://www.uasbangalore.edu.in

ಯೂಟೂಬ್  https://www.youtube.com/c/UASBangaloreGKVK

ಫೇಸ್ ಬುಕ್ https://www.facebook.com/sis/uasb/ ಈ ಮೇಲಿನ ಯಾವುದಾದರೊಂದು ಲಿಂಕ್ ಮೇಲೆ ಕ್ಲಿಕ್ ಮಾಡಿ ನವೆಂಬರ್ 11 ರಿಂದ ನೇರವಾಗಿ ಮೊಬೈಲ್ ನಲ್ಲಿಯೇ ಕೃಷಿಮೇಳದಲ್ಲಿ ನಡೆಯುವ ಚಟುವಟಿಕೆ ವೀಕ್ಷಿಸಬಹುದು.

ಸಮಗ್ರ ಬೇಸಾಯ ಸೇರಿ ಹಲವು ಮಾಹಿತಿ ಲಭ್ಯ

ಖುಷ್ಕಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿ, ಸಮಗ್ರ, ಬೇಸಾಯ, ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದರ್ ತಿಳಿಸಿದ್ದಾರೆ.

Leave a Comment