ಬೆಂಗಳೂರಿಗಷ್ಟೇ ಬೀಳುತ್ತಾ ಬೀಗ? ಶೀಘ್ರದಲ್ಲಿ ನಿರ್ಧಾರ

Written by By: janajagran

Updated on:

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ತೀವ್ರಗತಿಯಲ್ಲಿ ಏರುತ್ತಲೇ ಇದೆ. ಕೌರೋನಾ ನಿಯಂತ್ರಣಕ್ಕೆ ಬರದೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಸರ್ಕಾರಕ್ಕೆ ಚಿಂತಿಗೀಡುಮಾಡಿದೆ. ರಾಜ್ಯಾದ್ಯಂತ ಅಧಿಕೃತವಾಗಿ (Karnataka Lockdown) ಲಾಕ್ಡೌನ್ ಹೇರಲು ಸರ್ಕಾರ ಗಂಭೀರ  ಚಿಂತನೆ ನಡೆಸಿದೆ.

ಇಂದು ನಡೆಯುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯುವಸಂಪುಟದಲ್ಲಿ ನಿರ್ಧಾರವಾಗಲಿದೆ. ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಬೇಕು ಅಥವಾ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಲಾಕ್ಡೌನ್ ಹೇರಬೇಕೋ ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ ನಿಮ್ಮ ಹೆಸರಿಗೆ ಯಂತ್ರೋಪಕರಣ ಪಡೆಯಲಾಗಿದೆಯೇ? ಚೆಕ್ ಮಾಡಿ

ನಾಗಲೋಟದಲ್ಲಿ ಸಾಗುತ್ತಿರುವ ಕೊರೊನಾ ಎರಡನೇ ಅಲೆಯ ಸರಪಣಿ ಕಟ್‌ ಮಾಡಲು ವೀಕೆಂಡ್‌ ಕರ್ಫ್ಯೂ ಮಾದರಿಯ ಕ್ರಮ ವಾರದ ಎಲ್ಲ ದಿನವೂ ಇರಬೇಕು. ಇಲ್ಲದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂಬ ಅಭಿಪ್ರಾಯವೂ ಇದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆ ಬಂದ್‌ ಮಾಡಿಸಬೇಕು. ಕೆಲ ದಿನಗಳ ಕಾಲ ವಾರದ ಎಲ್ಲ ದಿನವೂ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿದ್ದರೆ ಜನ ಗುಂಪು ಸೇರಲು ಆಸ್ಪದ ಇರುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಲಿದೆ.

Karnataka Lockdown ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿ ಹೋಗಿತ್ತು. ಈ  ಮತ್ತೆ ‘ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಮತ್ತೆ ಹದಗೆಡಲಿದೆ. ಕೊರೊನಾ ಮೊದಲ ಅಲೆಯಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ. ಇದರ ಮಧ್ಯೆ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಯಾದರೆ ಬಹಳ ಕಷ್ಟ. ಈಗಾಗಲೇ ಕರ್ಫ್ಯೂ ಮೂಲಕ ಅಘೋಷಿತ ಲಾಕ್‌ಡೌನ್‌ ಜಾರಿಯಲ್ಲಿದೆ,” ಎಂದು ವಾಣಿಜ್ಯ ವಲಯದವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಇಂದು ನಡೆಯುವ ಸಭೆಯಲ್ಲಿ ಸಂಪೂರ್ಣ ಲಾಕ್ಡೌನೋ ಅಥವಾ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಲಾಕ್ಡೌನ್ ಹೇರಲಾಗುತ್ತೋ ಎಂಬುದು ಗೊತ್ತಾಗುತ್ತದೆ.

ಲಾಕ್ಡೌನ್ ಮತ್ತೆ ಆದರೆ ಬೆಂಗಳೂರಿನೊಂದಿಗೆ ಇತರ ಜಿಲ್ಲೆಗಳಿಗೆ ಲಾಕ್ಡೋನ್ ಬೀಳುವ ಸಾಧ್ಯತೆಯಿದೆ. ಏಕೆಂದರೆ ಈಗಾಗಲೇ ಲಾಕ್ಡೋನ್ ಹೇರಿದ್ದರಿಂದ  ರಾಜ್ಯದ ಜನತೆ ಹಲವಾರು ರೀತಿಯಲ್ಲಿ ಸಮಸ್ಯೆ ಅನುಭವಿಸಿದ್ದಾರೆ. ರಾಜ್ಯದಲ್ಲಿ ಮತ್ತೇ ಸಮಸ್ಯೆ ಎದುರಿಸುವ ಅಗತ್ಯವಿಲ್ಲ.  ಏಕೆಂದರೆ  ಲಾಕ್ಡೌನ್ ದಿಂದಾಗಿ ರಾಜ್ಯದೊಂದಿಗೆ ಇತರ ದೇಶಾದ್ಯಂತ ಜನರು ಹಲವಾರು ರೀತಿಯಲ್ಲಿ ಸಮಸ್ಯೆ ಎದುರಿಸಿದ್ದಾರೆ.

ದಿನನಿತ್ಯ ಬಳಕೆಯಾಗುವ ವಸ್ತುಗಳ ಖರೀದಿಗೆ ಸಮಸ್ಯೆ ಎದುರಿಸಿದರು. ಇದರೊಂದಿಗೆ ಬಸ್ ಸಂಚಾರ ಬಂದಾದರೆ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಸಮಸ್ಯೆಯಾಗುತ್ತದೆ.  ಮಠ ಮಂದಿಗಳಿಗೆ, ಮದುವೆಗಳಿಗೆ ಜನ ಸೇರಲು ಆಗುತ್ತಿಲ್ಲ.  ತರಕಾರಿ ಖರೀದಿಗೆ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಲಾಕ್ಡೌನ್ ಹೇರಬಾರದೆಂದು  ಜನತೆ ಬೇಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮತ್ತೆೆ ಲಾಕ್ಡೌನ್ ಹೇರಿದರೆ ಬಸ್. ರೈಲಿನಲ್ಲಿ ಪ್ರಯಾಣಕ್ಕೂ ಮಿತಿ ಹೇರಲಾಗುವುದು. ಇದರಿಂದ ಜನ ಸಂಚಾರಕ್ಕೆ ಅಡೆತಡೆಯಾಗಲಿದೆ.  ದೇವರಲ್ಲಿ ಒಂದೇ ಬೇಡಿಕೊಳ್ಳುವುದೇನೆಂದರೆ ರಾಜ್ಯದಲ್ಲಿ ಮತ್ತೇ ಲಾಕ್ಡೌನ್ ಹೇರಬಾರದು.

Leave a Comment