ಈ ಜಿಲ್ಲೆಯ ರೈತರಿಗೆ 29.64 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ

Written by Ramlinganna

Updated on:

crop insurance compensation released ಪ್ರಸಕ್ತ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಲ್ಲಿ 45906 ರೈತರಿಗೆ 29.64 ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.

ಹೌದು, ಪ್ರಸಕ್ತ 2022 ರ ಮುಂಗಾರು ಹಂಗಾಮಿನ ಆಗಸ್ಟ್ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ಅತೀವೃಷ್ಟಿಯಿಂದಾಗಿ ಹಾಳಾದ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಳೀಯ ನಿರ್ಧಿಷ್ಟ ವಿಕೋಪದಡಿ 45,906 ರೈತರಿಗೆ 29.64 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ  ವಿಮಾ ಸಂಸ್ಥೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತೀವೃಷ್ಟಿಯಿಂದ ಉದ್ದು, ಹತ್ತಿ, ಹೆಸರು, ಶೇಂಗಾ, ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ತೊಗರಿ, ಸೋಯಾಬಿನ್, ಸೂರ್ಯಕಾಂತಿ ಹಾಗೂ ಟೊಮ್ಯಾಟೋ ಬೆಳೆಗಳು ಹಾಳಾಗಿ 1,18,924 ರೈತರು ದೂರು ಸಲ್ಲಿಸಿದ್ದು, ಈ ಪೈಕಿ ಮೊದಲಹಂತದಲ್ಲಿ 45,906 ರೈತರಿಗೆ 29.64 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿವಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ತಾಲೂಕುವಾರು ನೋಡುವುದಾದರೆ ಅಫಜಲ್ಪುರ ತಾಲೂಕಿನ 3473 ರೈತರಿಗೆ 2.87 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆಳಂದ ತಾಲೂಕಿನ 12,599 ರೈತರಿಗೆ 8.15 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆಯಾಗಿದೆ. ಚಿಂಚೋಳಿ ತಾಲೂಕಿನ 8231 ರೈತರಿಗೆ 3.38 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಚಿತ್ತಾಪುರ ತಾಲೂಕಿನ 2387 ರೈತರಿಗೆ 1.67 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಜೇವರ್ಗಿ ತಾಲೂಕಿನ 642 ರೈತರಿಗೆ 0.77 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಅದೇ ರೀತಿ ಕಲಬುರಗಿ ತಾಲೂಕಿನ 4019 ರೈತರಿಗೆ 3.17 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಕಾಳಗಿ ತಾಲೂಕಿನ 5072 ರೈತರಿಗೆ 2.43 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಕಮಲಾಪುರ ತಾಲೂಕಿನ 2549 ರೈತರಿಗೆ 1.53 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಅದೇ ರೀತಿ ಸೇಡಂ ತಾಲೂಕಿನ 6275 ರೈತರಿಗೆ 4.90 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಶಹಾಬಾದ್ ತಾಲೂಕಿನ 424 ರೈತಿರಗೆ 0.36 ಕೋಟಿ ರೂಪಾಯಿ ಹಾಗೂ ಯಡ್ರಾಮಿ ತಾಲೂಕಿನ 235 ರೈತರಿಗೆ 0.36 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಪ್ರಮುಖವಾಗಿ 40,596 ರೈತರ ತೊಗರಿ ಬೆಳೆ ಹಾನಿಗೆ 27.31 ಕೋಟಿ ರೂಪಾಯಿ ಬಿಡುಗಡೆಯಾಗಿದೆ.2684 ರೈತರ ಹೆಸರು ಬೆಳೆ ಹಾನಿಗೆ 1.06ಕೋಟಿ ರೀೂಪಾಯಿ ಹಾಗೂ 2280 ರೈತರ ಉದ್ದು ಬೆಳೆ ಹಾನಿಗೆ 1.02 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

crop insurance compensation released ಬೆಳೆ ವಿಮೆ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ

ರೈತರು ಈ https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಪೇಜ್ ಓಪನ್ ಆಗುತ್ತದೆ. ಅಲ್ಲಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ನಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ಹಾಕಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.

ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿ ಬೆಳೆ ವಿಮೆಯ ಮಾಹಿತಿ ಪಡೆಯಿರಿ

ಕಲಬುರಗಿ ಜಿಲ್ಲೆಯ ರೈತರು ಬೆಳೆ ವಿಮೆ ಕುರಿತಂತೆ ಯೂನಿವರ್ಸಲ್ ಸ್ಯಾಂಪೋ ಉಚಿತ ಸಹಾಯವಾಣಿ 1800 200 5142 ಗೆ ಕರೆ ಮಾಡಬಹುದು.  ನಿಮ್ಮ ತಾಲೂಕು ವಿಮಾ ಪ್ರತಿನಿಧಿಗಳ ನಂಬರ್ ಸಹ ಪಡೆದುಕೊಂಡು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಕೇಳಬಹುದು.

ಇತರ ಜಿಲ್ಲೆಯ ರೈತರು  ತಮ್ಮ ಖಾತೆಗೆ ಬೆಳೆ ವಿಮೆಹಣ ಜಮೆಯಾಗಿರುವುದನ್ನು ಚೆಕ್ ಮಾಡಬಹುದು. ಬೆಳೆ ವಿಮೆ ಸಹಾಯವಾಣಿ ನಂಬರ್ 18001801551 ಗೆ ಕರೆ ಮಾಡಬಹುದು.

Leave a Comment