ಕೃಷಿ ಕೆಲಸಗಳಿಗೆ krishi Bheema machine ತಯಾರಿಸಿದ ರೈತ ಚನ್ನಪ್ಪ

Written by By: janajagran

Updated on:

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿಯಿಂದ ವಿಮುಖರಾಗುತ್ತಿರುವ ಇಂದಿನ ಕಾಲಮಾನದಲ್ಲಿ ಇಲ್ಲೊಬ್ಬ ರೈತ ಕೃಷಿ ಚಟುವಟಿಕೆಗೆ ಏಕವ್ಯಕ್ತಿ ಬಳಸುವ ಸಾಧನವನ್ನು ( Agriculture Krishi Bheema machine) ಸಿದ್ಧಪಡಿಸಿದ್ದಾರೆ.

ಹೌದು, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಚನ್ನಪ್ಪ ವೀರಭದ್ರಪ್ಪ ಕೋಲಕಾರರವರು ಕೃಷಿ ಕಾರ್ಮಿಕರಿಲ್ಲದೆ ಪರದಾಡುವ ರೈತರಿಗಾಗಿ ಪೆಟ್ರೋಲ್, ಡಿಸೇಲ್ ಇಲ್ಲದೆ ಕೃಷಿ ಕೆಲಸಗಳಿಗೆ ಅನುಕೂಲ ಆಗುವ ಹೊಸ ಯಂತ್ರವೊಂದನ್ನು ಸಂಶೋಧಿಸಿ ಬೆರಗು ಮೂಡಿಸಿದ್ದಾರೆ.

Krishi Bheema machine ಕೃಷಿ ಕೆಲಸಗಳಿಗೆ ತಯಾರಿಸಿದ ರೈತ ಚನ್ನಪ್ಪ

ರೈತ ಚನ್ನಪ್ಪರವರು ಸ್ಥಳೀಯವಾಗಿ ಸಿಗುವ. ಕಬ್ಬಿಣ ಸಲಾಕೆ, ಸರಳು, ಚಕ್ರಗಳು, ಸರಪಳಿ, ಮೋಟಾರು ಚೈನ್, ಕಟ್ಟಿಗೆ ಇತ್ಯಾದಿಗಳನ್ನು ಬಳಸಿ ಈ ಸಾಧನೆಯನ್ನು ತಯಾರಿಸಿದ್ದಾರೆ. ಈ ಉಪಕರಣವನ್ನು ರೈತರು ಸರಳವಾಗಿ ಹೊಲದಲ್ಲಿ ಉಪಯೋಗಿಸಬಹುದು. ಯಂತ್ರಕ್ಕೆ ಪೆಟ್ರೋಲ್, ಡಿಸೇಲ್‌ನ ಅವಶ್ಯಕತೆ ಇಲ್ಲ. ಶಬ್ದರಹಿತ, ಹೊಗೆರಹಿತ ಉಪಕರಣ ಇದಾಗಿದೆ. ಕೇವಲ ಚೈನು ಎಳೆಯುತ್ತಾ ಚಾಲನೆ ಮಾಡಬಹುದು.

ಇದನ್ನೂ ಓದಿ 13 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ

ಈ ಉಪಕರಣದ ಸಹಾಯದಿಂದ ರೈತರು ರಂಟೆ, ಕುಂಟೆ ಹೊಡೆಯುವುದು, ಬಿತ್ತನೆ ಕಾರ್ಯವನ್ನೂ ಮಾಡುವುದು, ಕೂಲಿಕಾರರಿಲ್ಲದೆ ಎಡೆ ಹೊಡೆಯುವ ಕೆಲಸವನ್ನು ಸುಲಭವಾಗಿ ಮಾಡಬಹುದು. ಸೈಕಲ್ ತುಳಿಯುವಂತೆ ಪೆಡಲ್‍ಗಳನ್ನು ತುಳಿದಾಗ ಉಪಕರಣ ಕಾರ್ಯ ನಿರ್ವಹಿಸುತ್ತದೆ. ಯಾವುದೇ ರೈತ ಸುಲಭವಾಗಿ ಈ ಉಪಕರಣವನ್ನು ಹೊಲದಲ್ಲಿ ಉಪಯೋಗಿಸುವಂತೆ ತಯಾರಿಸಿದ್ದಾರೆ.

ಮುಂದಿನ ಏಕಚಕ್ರ ಸರಳವಾಗಿ ಹೊರಳುವಂತೆ ಪ್ಯಾಡಲ್ ಕೂಡ ಅಳವಡಿಸಿದ್ದಾರೆ. ಅಲ್ಲದೆ ರೈತರು ಆರಾಮಾವಾಗಿ ಕುರ್ಚಿಯ ಮೇಲೆ ಕುಳಿತು ಚಾಲನೆ ಮಾಡಬಹುದು. ರೈತರಿಗೆ ಆಳುಗಳು ಸಿಗದೆ ಇದ್ದಾಗ ಅವರಿಗೆ ಈ ಉಪಕರಣ ಸಹಾಯಕ್ಕೆ ಬರುತ್ತದೆ.

‘ಈಚಿನ ದಿನಗಳಲ್ಲಿ ರೈತರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂಲಿಕಾರರ ಸಮಸ್ಯೆ, ಯಂತ್ರಗಳ ದುಬಾರಿ ವೆಚ್ಚಭರಿಸಲು ರೈತರಿಂದ ಸಾಧ್ಯ ಆಗುತ್ತಿಲ್ಲ. ಕಾರಣ ಅತಿ ಕಡಿಮೆ ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಬೇಕೆನ್ನುವ ಉದ್ದೇಶ ಇದೆ. ಸರ್ಕಾರ ರೈತರಿಗೆ ಕಡಿಮೆ ಹಣದಲ್ಲಿ ಯಂತ್ರ ಸಿದ್ದಪಡಿಸಿ ಅನೂಕೂಲ ಮಾಡಿಕೊಟ್ಟರೆ ರೈತರ ಸಮಸ್ಯೆ ಅಲ್ಪಮಟ್ಟಿಗಾದರೂ ಪರಿಹಾರವಾಗುತ್ತದೆ’ ಎಂದು ಚನ್ನಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೃಷಿ ಉಪಕರಣ ನೀಡಲು ಅರ್ಜಿ ಆಹ್ವಾನ

2022-23ನೇ ಸಾಲಿನ ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣ ಘಟಕ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ತಾಲೂಕಿನ ಕಸಬಾ, ವರುಣ, ಇಲವಾಲ ಹಾಗೂ ಜಯಪುರ ಹೋಬಳಿಯಲ್ಲಿ ಕೃಷಿ ಯಾಂತ್ರೀಕರಣ ಘಟಕಗಳಾದ ರೋಟಾವೇಟರ್, ಕಲ್ಟಿವೇಟರ್, 5 ಹಲ್ಲಿನ ನೇಗಿಲು, ಪವರ್ ವೀಡರ್, ಬ್ರಷ್ ಕಟರ್, ಮೇವು ಕಟಾವು ಯಂತ್ರ, ಭತ್ತ ಕಟಾವು ಯಂತ್ರ ಬಹುಬೆಳೆ ಒಕ್ಕಣೆಯಂತ್ರ ಹಾಗೂ ಕೃಷಿ ಸಂಸ್ಕರಣಾ ಘಟಕಗಳಾದ ರಾಗಿ ಕ್ಲೀನಿಂಗ್ ಮಿಷಿನ್, ಪ್ಲೋರ್ ಮಿಲ್, ಹಲ್ಲರ್, ಮತ್ತು ಶುಗರ್ ಕೇನ್  ಜ್ಯೂಸ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳಾದ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಕ್ಕೆ ಹಾಗೂ ಮುಂತಾದ ಕೃಷಿ ಯಂತ್ರೋಪಕರಣಗಳು ಲಭ್ಯವಿರುತ್ತದೆ.

ಬಲ್ಕ್ ಸಿಟಿ ಕಾಂಪೋಸ್ಟ್ ಒಂದು ಟನ್ ಗೆ 1850 ರೂಪಾಯಿ ಅಥವಾ ನೇರವಾಗಿ ಸಂಸ್ಥೆಯವರಿಂದ ಖರೀದಿಸಿದರೆ ಪ್ರತಿಟನ್ ಗೆ 200 ರೂಪಾಯಿ ಪಾವತಿಸಬಹುದು.

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.

ಸೂಕ್ಷ್ಮ ನೀರಾವರಿ ಘಟಕಗಳಿಗೆ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.

Leave a Comment