ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಪರಿಹಾರ ಜಮೆಯಾಗಲ್ಲ

Written by By: janajagran

Updated on:

Do you know why some farmers not get crop insurance ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದಾಗ ರೈತರ ಕೈಹಿಡಿಯಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ರೈತರು ತಾವು ಬೆಳೆದ ಬೆಳೆಗಳಿಗೆ ವಿಮೆ ಸಹ ಮಾಡಿಸುತ್ತಾರೆ. ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗುವುದಿಲ್ಲ.  ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದಾಗ ಯಾರಿಗೆ ಮಾಹಿತಿ ನೀಡಬೇಕು. ಯಾವಾಗ ಮಾಹಿತಿ ನೀಡಬೇಕು ಎಂಬ ಮಾಹಿತಿಯ ಕೊರತೆಯಿರುತ್ತದೆ. ಯಾರಿಗೆ ಮಾಹಿತಿ ನೀಡಬೇಕು. ಯಾವಾಗ ಮಾಹಿತಿ ನೀಡಬೇಕು ಬೆಳೆ ವಿಮೆ ಹೇಗೆ ನಿರ್ಧರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಮತ್ತು ಅತೀವೃಷ್ಟಿಯಿಂದಾಗಿ ಬೆಳೆ ಮುಳುಗಡೆಯಾದರೆ ಬೆಳೆ ನಷ್ಟವಾದಾಗ ಬೆಳೆ ವಿಮಾ ನಷ್ಟ ಪರಿಹಾರ ನೀಡಬೇಕೆಂಬುದು ವಿಮಾ ಕಂಪನಿಯ ನಿಯಮವಾಗಿದೆ. ಬೆಳೆ ನಷ್ಟವಾದಾಗ  ವಿಮೆ ಮಾಡಿಸಿದ ರೈತರು ಸಂಬಂಧಪಟ್ಟ ವಿಮಾ ಸಂಸ್ಥೆಯ ಕಚೇರಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು 72 ಗಂಟೆಯೊಳಗಾಗಿ ತಿಳಿಸಿದಲ್ಲಿ ವಿಮೆ ಮಾಡಿಸಿದ ಕಂಪಂನಿಯ ಸಿಬ್ಬಂದಿಗಳು ಸ್ಥಳಕ್ಕೆ ಬರುತ್ತಾರೆ. ಬೆಳೆ ಹಾಳಾದ ಜಮೀನಿಗೆ ಬಂದು ಬೆಳೆ ಹಾಳಾದ ಬಗ್ಗೆ ಪರಿಶೀಲಿಸಿ ರೈತರಿಗೆ ಪರಿಹಾರ ನೀಡಲು ಮುಂದುವರಿಸುತ್ತಾರೆ. ಆದರೆ ಬಹುತೇಕ ರೈತರು ಬೆಳೆ ಹಾಳಾದಾಗ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯೇ ನೀಡುವುದಿಲ್ಲ. ಇದರಿಂದಾಗಿ ಬಹುತೇಕ ರೈತರು ಬೆಳೆ ವಿಮೆ ಪರಿಹಾರದಿಂದ ವಂಚಿತರಾಗುತ್ತಾರೆ.

Do you know why some farmers not get crop insurance ವಿಮೆ ಮಾಡಿಸಿದ ರೈತರು ಏನು ಮಾಡಬೇಕು?

ಬೆಳೆ ವಿಮೆ ಮಾಡಿಸಿದ ರೈತರು ಯಾವ ಬೆಳೆಗೆ ಎಷ್ಟು ಹಣ ವಿಮೆ ಹಣ ಕಟ್ಟಿದ್ದಾರೆ ಮತ್ತು ಯಾವ ವಿಮಾ ಕಂಪನಿಗೆ ಹಣ ಕಟ್ಟಿದ್ದಾರೆಎಂಬುದರ ಕುರಿತು ರಶೀದಿ ಹೊಂದಿರಬೇಕು. ವಿಶೇಷವಾಗಿ ವಿಮಾ ಕಂಪನಿಯ ನಿಮ್ಮ ತಾಲೂಕಿನ ಏಜಿಂಟ್ ನಂಬರ್ ಹೊಂದಿರಬೇಕು. ಏಕೆಂದರೆ ಬೆಳೆ ನಷ್ಟವಾದಾಗ ಅವರಿಗೆ ನೀವು ಮಾಹಿತಿ ನೀಡಬೇಕಾಗುತ್ತದೆ. ಮಾಹಿತಿ ನೀಡಿದ ನಂತರ ಸಂಬಂಧಿಸಿದವರು ನಿಮ್ಮ ಜಮೀನಿಗೆ ಬಂದು ಪರಿಶೀಲನೆ ಮಾಡುತ್ತಾರೆ.

ಬೆಳೆ ವಿಮೆ ಪರಿಹಾರ ಹೇಗೆ ನಿರ್ಧರಿಸಲಾಗುವುದು?

ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುವುದು.

ಇದನ್ನೂ ಓದಿ :ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾದಾಗ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡುವುದು.

ಯಾವ ಜಿಲ್ಲೆಗೆ ಯಾವ ವಿಮೆ ಕಂಪನಿ ತಿಳಿಯಬೇಕೇ?

ಒಂದು ವೇಳೆ ನಿಮ್ಮ ಜಿಲ್ಲೆಗೆ ಯಾವ ಬೆಳೆ ವಿಮೆ ಕಂಪನಿಯಿದೆ ಎಂಬುದು ಗೊತ್ತಿಲ್ಲದಿದ್ದರೆ https://www.samrakshane.karnataka.gov.in/HomePages/frmKnowYourInsCompany.aspx

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯಾವ ಯಾವ ಜಿಲ್ಲೆಗಳಿಗೆ ಯಾವ ಯಾವ ವಿಮಾ ಕಂಪನಿಗಳನ್ನು ವಹಿಸಲಾಗಿದೆ ಎಂಬ ಪಟ್ಟಿ ಓಪನ್ ಆಗುತ್ತದೆ. ಒಂದು ವೇಳೆ ನಿಮಗೆ ನಿಮ್ಮ ಜಿಲ್ಲೆಯ ವಿಮಾ ಕಂಪನಿ ನಂಬರ್ ನೆನಪಿಲ್ಲದಿದ್ದರೆ ರೈತರು 1800 180 1551 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಪಡೆದು ಮಾಹಿತಿ ನೀಡಬಹುದು.

 ಬೆಳೆ ವಿಮೆ ಹಣ ಜಮೆಯಾಗಿರುವ ಸ್ಟೇಟಸ್ ನೋಡುವುದು ಹೇಗೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿವಿಧ ಬೆಳೆಗಳಿಗೆ ವಿಮೆ ಕಟ್ಟಿದ ರೈತರು ಮೊಬೈಲ್ ನಲ್ಲಿ ಯೇ ಸ್ಟೇಟಸ್ ನೋಡಬಹುದು. ರೈತರು ಈ https://www.samrakshane.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಸರ್ಕಾರದ  ವೆಬ್ ಪೇಜ್ ಓಪನ್ ಆಗುತ್ತದೆ. ಮುಂಗಾರು ಬೆಳೆಯ ಅರ್ಜಿ ಸ್ಟೇಟಸ್ ನೋಡಬೇಕಾದರೆ 2021-22ನೇ ಆಯ್ಕೆ ಮಾಡಿಕೊಂಡು ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ಹಿಂಗಾರು ಬೆಳೆಗಳ ಅರ್ಜಿಯ ಸ್ಟೇಟಸ್ ನೋಡಬೇಕಾದರೆ Rabi ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು.  ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ.  ಅಲ್ಲಿ ಸ್ಟೇಟಸ್ Farmers ಕಾಲಂ ಕೆಳಗಡೆಯಿರುವ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಿಮ್ಮ ಅರ್ಜಿಯು ವಿಮೆ ಕಂಪನಿಯಿಂದ ಸ್ವೀಕೃತವಾಗಿದೆಯೋ ಇಲ್ಲವೆ ಎಂಬ ಮೆಸೇಜ್ ಕಾಣುತ್ತದೆ. ಅದರ ಕೆಳಗಡೆ ಬೆಳೆ ವಿಮೆ ನೋಂದಣಿಯ ಪ್ರಗತಿಯಲ್ಲಿದೆಯೋ ಇಲ್ಲವೆ ಮತ್ತು ಯಾಬ ಬ್ಯಾಂಕಿನಿಂದ ಅರ್ಜಿ ಪ್ರಗತಿಯಲ್ಲಿದೆ ಎಂಬ ಮೆಸೇಜ್ ಕಾಣುತ್ತದೆ.

Leave a Comment