Bele sala manna ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

Bele sala manna status ನ್ನು ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ಯಾರ ಸಹಾಯವೂ ಇಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ಹೌದು, ಐದು ವರ್ಷದ ಹಿಂದೆ 2018 ರಲ್ಲಿ ಬೆಳೆ ಸಾಲಮನ್ನಾ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಕೆಲವ ತಾಂತ್ರಿಕ ಕಾರಣಗಳಿಂದ ಕೆಲವು ರೈತರ ಬೆಳೆ ಸಾಲಮನ್ನಾ ಆಗಿದ್ದಿಲ್ಲ.  ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸಾಲಮನ್ನಾ ಪ್ರಕ್ರಿಯೆ ಪೂರ್ಣ ಗೊಳಿಸಲಾಗುತ್ತಿದೆ. ಹೌದು, ರೇಶನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಪಹಣ ಪತ್ರಿಕೆಯಲ್ಲಿ ಹೆಸರು ವ್ಯತ್ಯಾಸವಿದ್ದರಿಂದ ಕೆಲವು ರೈತರು ಸಾಲಮನ್ನಾ ಭಾಗ್ಯದಿಂದ ಹೊರಗುಳಿದಿದ್ದರು. ಈಗ ಕೆಲವು ರೈತರಿಗೆ ಸಾಲಮನ್ನಾ ಆಗಿದೆ. ಅಂದರೆ ದಾಖಲಾತಿಗಳ ಪರಿಶೀಲನೆಯಾದ ನಂತರ ಕೆಲವರಿಗೆ ಸಾಲಮನ್ನಾ ಆಗಿದೆ.  ನಿಮ್ಮ ಬೆಳೆ ಸಾಲಮನ್ನಾ ಸ್ಟೇಟಸ್ ಮೊಬೈಲ್ ನಲ್ಲಿ ಹೀಗೆ  ಚೆಕ್ ಮಾಡಬಹುದು.

Bele sala manna ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಕೇವಲ ಒಂದೇ ನಿಮಿಷದಲ್ಲಿ ಬೆಳೆ ಸಾಲಮನ್ನಾ ಸ್ಟೇಟಸ್ ನ್ನು ಚೆಕ್ ಮಾಡಬಹುದು. ಹೌದು, ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ವಾಣಿಜ್ಯ ಬ್ಯಾಂಕಿಗೆ ಸಾಲಮನ್ನಾ ವರದಿ ಕಾಣಿಸುತ್ತದೆ. ಅಂದರೆ ನೀವು ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಇಲ್ಲಿ ಚೆಕ್ ಮಾಡಬಹುದು.  ಇಲ್ಲಿ ಮಾದರಿಯಲ್ಲಿ ರೈತ, ಜಿಲ್ಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರು ಯಾರು ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ ಅವರ ಸಾಲಮನ್ನಾ ರಿಪೋರ್ಟ್ಓಪನ್ ಆಗುತ್ತದೆ. ನಿಮ್ಮ ಹೆಸರು, ಯಾವ ಬ್ಯಾಂಕಿನಲ್ಲಿ ಸಾಲ ಪಡೆಯಲಾಗಿದೆ, ಬ್ಯಾಂಕ್ ಶಾಖೆಯ ಹೆಸರು, ನಿಮ್ಮ ಸಾಲ ಯಾವ ಪ್ರಕಾರದ್ದು, ಹಾಗೂ ನೀವು ಎಷ್ಟು ಸಾಲ ಪಡೆದಿದ್ದೀರಿ ನಿಮಗೆ ಹಸಿರು ಪಟ್ಟಿಯಲ್ಲಿ ಸೇರಿಲಾಗಿದೆಯೇ? ನಿಮಗೆಷ್ಟು ಸಾಲ ಮನ್ನಾ ಆಗಿದೆ. ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಹಾಗೂ ಪಡಿತರ ಚೀಟಿ ಸಂಖ್ಯೆ ಸಂಖ್ಯೆಯ ಮಾಹಿತಿ ಇರುತ್ತದೆ.  ಈ ಆಧಾರದ ಮೇಲೆ ರೈತರು ತಮಗೆಷ್ಟು ಬೆಳೆಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿದೆ ಸಾಲ ಪಡೆದಿದ್ದರೆ ಸ್ಟೇಟಸ್ ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಮಾದರಿ ಕೆಳಗಡೆ ರೈತ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮ ಆಯ್ಕ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮೂರಿನಲ್ಲಿ ಯಾರು ಯಾರಿಗೆ ಬೆಳೆ ಸಾಲಮನ್ನಾ ಆಗಿದೆ ಎಂಬ ಪಟ್ಟಿ ಕಾಣಿಸುತ್ತದೆ.

ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2018 ರಲ್ಲಿ 1 ಲಕ್ಷ ರೂಪಾಯಿಯವರೆಗೆ ಬೆಳೆ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಇದಾಗಿ ಐದು ವರ್ಷಗಳಾದರೂ ಸಹ ಇನ್ನೂ ಹಲವಾರು ರೈತರು ಸಾಲಮನ್ನಾ ದೊರೆತಿಲ್ಲ. ಕೂಡಲೇ ಸರ್ಕಾರವು ಬೆಳೆ ಸಾಲಮನ್ನಾ ಆಗದೆ ಉಳಿದಿರುವ ರೈತರ ಸಾಲ ಮನ್ನಾ ಮಾಡಬೇಕೆಂಬ ರೈತರ ಒತ್ತಾಯವಾಗಿದೆ.

ಇದನ್ನೂ ಓದಿ : Gruhalakshmi Annabhagya bele hani ಸ್ಟೇಟಸ್ ಇಲ್ಲೇ ಚೆಕ್ ಮಾಡಿ

2018 ಕ್ಕಿಂತ ಮುಂಚಿತವಾಗಿ ಸಾಲ ನೀಡುವಾಗು ದಾಖಲಾತಿಗಳ ಪರಿಶೀಲನೆಗೆ ಸರಿಯಾಗಿ ನಡೆಸಿಲ್ಲ. ಪಹಣಿ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿಯಲ್ಲಿ ಒಂದೇ ರೀತಿ ಹೆಸರಿರಬೇಕೆಂದು ನಿಮಯವಿರಲಿಲ್ಲ. ಜಮೀನಿನ ದಾಖಲೆಗಳಲ್ಲಿ ಕೆಲವು ಅಕ್ಷರ ದೋಷಗಳಿದ್ದವು. ಸಾಲಮನ್ನಾ ಮಾಡುವಾಗ ಇವೆಲ್ಲಾ ಪರಿಶೀಲನೆ ಮಾಡಲಾಗುವುದು ಎಂಬ ಪರಿಕಲ್ಪನೆ ರೈತರಿಗಿರಲಿಲ್ಲ.ಆದರೆ ಕೆಲವು ತಾಂತ್ರಿಕ ದೋಷಗಳಿಂದ ಹಲವಾರು ರೈತರು ಸಾಲಮನ್ನಾ ಭಾಗ್ಯದಿಂದ ದೂರ ಉಳಿದಿದ್ದಾರೆ.

Leave a Comment